ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, June 23, 2012

ಯುಗಾದಿ

***********************************************************************************************

ಬಾಳೆಂಬ ಈ ಪಯಣ ಸಾಗುತಿರಲು ,
ಕಹಿಯೆಂಬ ದುಃಖವು ಮೂಡುತಿರಲು,
ಬದುಕೇ ಸಾಕೆನಿಸುವಷ್ಟು 
ಮನದೊಳಗೆ ನೋವು ತುಂಬಿರಲು ,
ಬಂತು ! ಬಂತು !ಬಂತು !
ನವ ವಸಂತದ ,ಚೈತ್ರ ಮಾಸದ 
ಯುಗಾದಿ ! ಈ ಯುಗಾದಿ !
ಮನದ ದುಗುಡವೆಲ್ಲ ಕಳೆದು, 
ಹರುಷವೆಂಬ ಸಿಹಿಯ ಉಣಿಸಲು, 
ಬಂತು ಈ ಯುಗಾದಿ !
ಬೇವು - ಬೆಲ್ಲವ  ಜಿಗಿದು ,
ಬದುಕಿನ ಕಹಿ - ಸಿಹಿಯೆಂಬ 
ಏರುಪೇರಿನ ಅವಗಡವ
ಸರಿದೂಗಲೆಂದು ಬಂತು! 
ಈ ಯುಗಾದಿ!
ನವ  ವರುಷದ ಸೆಲೆ   , 
ನವ ಚಿಗುರಿನ ಎಲೆ ,
ನನ್ನ ಬಾಳಿನ ಪುಟಕೆ ನವ 
ಮುನ್ನುಡಿಯ ಬರೆಯಲೆಂದು 
ಬಂತು , ಈ ಯುಗಾದಿ !
ಯುಗ ಯುಗಕ್ಕೂ ಬೆಂಬಿಡದೆ 
ತೋರುತಿಹುದು ಬಾಳಿಗೆ ಹಾದಿ 
ಈ ಯುಗಾದಿ!! ಈ ಯುಗಾದಿ!!

-@(-ಗಣಿ -)@-
***********************************************************************************************

No comments:

Post a Comment