ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, June 30, 2012

ಸಾರ್ಥಕ ಜೀವನ !!

***********************************************************************************************
ಹುಟ್ಟೆಂಬುದು..
ಹೆತ್ತ ತಾಯ
ಗರ್ಭದಿ ಹೊರ ಬರುವುದು ,
ಸಾವೆಂಬುದು..
ಭೂ - ತಾಯಿಯ 
ಗರ್ಭದೊಳ  ಹೊಕ್ಕುವುದು !!
ಈ ಬಂದು-ಹೋಗುವ 
ನಡುವಿನಂತರದಿ 
ಆ ಗರ್ಭ ಹೊತ್ತ ತಾಯರ 
ನಗಿಸಿ ಋಣವ ತೀರಿಸುವುದೇ ಸಾರ್ಥಕ ಜೀವನ!!

-@(ಜಿ.ಪಿ.ಗಣಿ)@-
***********************************************************************************************

Thursday, June 28, 2012

ಓ ಅನಂತರೆ!!

***********************************************************************************************
ಅನಾಥರು ನಾವ್ ಅನಾಥರು 
ಎಂದು ಮರುಗಬೇಡಿ ಮನಗಳೇ
ಜಗದಿ ಸಂಬಂಧಗಳ ಬಲೆಯೊಳಗೆ 
ಬಿದ್ದೊದ್ದಾಡಿ ಹೊರಬರಲು 
ಕಾಯುತಿರುವ ಮನುಜರ  ನೋಡಿರೋ !
ನಿಮಗ್ಯಾವ  ಹಂಗಿಲ್ಲ ,
ನಿಮಗ್ಯಾರ ಭಯವಿಲ್ಲ ,
ನಿಮ್ಮಯ ಮನವು ತೋರುವುದು 
ತಾಯಿಯ ಮಮತೆಯ ,
ತಂದೆಯ ಪ್ರೀತಿಯ ,
ಹುಟ್ಟಿನಿಂದಲೇ ನಿಮ್ಮ 
ಅಸ್ತಿತ್ವದ ತಳಪಾಯವ 
ಗಟ್ಟಿಮಾಡುವ  ಸಾಮರ್ಥ್ಯವ 
ನೀಡಿದ ನಮ್ಮ ಶಂಭುಲಿಂಗನ ಕೊಂಡಾಡಿರೊ!!
-@(ಜಿ.ಪಿ.ಗಣಿ)@-
***********************************************************************************************

ಓ ನನ್ನ ಮುದ್ದು ಸೈಕಲ್ಲೇ ...

*********************************************************************************************** 
            ತಾಳ್ಮೆ ಇದ್ದವ್ರ್ಗ್ ಮಾತ್ರ !!!!! ನೋಡ್ರಿ ಗಣ್ಯಾತಿ -ಗಣ್ಯರೇ , ನಂಗೆ ಬರಿಬೇಕಾರೆ ಗೊತ್ತಿರ್ಲಿಲ್ಲ !! ಸುಮ್ನೆ ಕುಶಿನಾಗೆ ಕೂತ್ಕೋ ಗೀಚ್ಬುಟ್ಟೆ , ಆಮ್ಯಾಗ್ ನೋಡ್ತಿವ್ನಿ ! ಶ್ಯಾನೆ ಉದ್ದಕ್ಕಾಗ್ಬುಟ್ಟಿತ್ತು  ಅಂತೀನಿ . ಹು ,,, !! ಅದ್ಯಾನೋ ಅಂತಾರಲ್ಲ ಧೀರ್ಘ ಅಂತ ಹಂಗಾತು ,,, ! ಏನೋ  ನಂದು ಸೈಕಲ್ಗೆ ಮೇಲೆ ಪ್ಯಾರ್ಗೆ ಆಗ್ಬಿಡ್ತು ಅದ್ಕೆ ಮನ್ಸು ಕಿಸ್ಕೊಂಡು ಯಾನ್ಯಾನೋ  ಗೀಚ್ಬುಟ್ಟದೆ ,,, ತಪ್ಯಾಗಿದ್ರೆ ಹೊಟ್ಟೆಗ್  ಹಾಕಂಬುಡಿ ದಯವಿಟ್ಟು  :))))))))) ಆಯ್ತೆ ??? 

ಓ ನನ್ನ ಮುದ್ದು ಸೈಕಲ್ಲೇ ...
________________

ಓ ನನ್ನ ಮುದ್ದು ಸೈಕಲ್ಲೇ !!
ಅಪ್ಪನ ಬಾಳಿನ ರಥವೆ,
ನಿನ್ನಯ ನಗು ಮೊಗವ 
ಕಂಡೆನ್ನ ಮನದಲಿ 
ನಿನ್ನಯ  ಸವಾರಿಯ 
ಮಾಡಬೇಕೆಂಬ  
ಬಯಕೆ  ಮೂಡಿದ್ದು 
ನಿನಗೆ ನೆನಪಿದಯಾ.........?

ನಿನ್ನ ಒಂದು ಪೆಡಲಿನಲಿ 
ನನ್ನೊಂದು ಕಾಲನಿರಿಸಿ 
ಮಗದೊಂದು ಕಾಲನು 
ಭೂ - ತಾಯಿಯ ಮೇಲಿರಿಸಿ 
ಇಬ್ಬೊರೊಡನಾಟವಾಡಿ 
ಅರೆಪೆಡಲು ಕಲಿತು ,
ಡಬ್ಬಲ್ಲು ರೈಡಿಂಗು 
ಸಾಹಸಮಾಡಲೆಂದು
ಗೆಳೆಯನೊಡನೆ ಹೊರಟಾಗ 
ಆಯ ತಪ್ಪಿ ಬಿದ್ದು 
ಮೂವರು  ಮಯ್ಯಿ   - ಕೈಯ್ಯನು 
ತರಚಿಕೊಂಡಾದ  ಗಾಯದ ಕಲೆಗಳು 
ನಿನಗೆ ನೆನಪಿದೆಯಾ .......................?

ಆಯುಧ ಪೂಜೆಯಂದು 
ಹೂವಿನ ಹಾರವ ತೊಡಿಸಿ ,
ವಿಭೂತಿಯ ಪಟ್ಟೆಯ ಬಳಿಸಿ ,
ಬಾಳೆದಿಂಡಿನ ಮಲ್ಲಿಗೆಯ ಮೊಡಿಸಿ,
ರತಿಯಂತೆ ಸಿಂಗರಿಸಿ,
ನಿನ್ನ  ಕಾಲೆಂಬ ಚಕ್ರಕೆ 
ಬಲೂನೆಂಬ ಗೆಜ್ಜೆಯ ಕಟ್ಟಿ 
ಅದರ  ಸದ್ದಲಿ
ದಿಬ್ಬಣ ಹೊರಟಿದ್ದು 
ನಿನಗೆ ನೆನಪಿದೆಯಾ  ........................?

ಮುದ್ದಾದ ತರುಣಿಯರ 
ನೋಡಲು...!
ಹಿಗ್ಗುತ ಇಬ್ಬರೂ
ದೌಡಾಯಿಸಿದೊಮ್ಮೆಯಾದರೆ 
ಸ್ಲೋ  ಸೈಕಲ್ಲು ರೇಸಿನಲಿ
ನಾವಿಬ್ಬರೊಂದಾಗಿ 
ಮತ್ತಾತರುಣಿಯರ 
ಗಮನ ಸೆಳೆದುದು 
ನಿನಗೆ  ನೆನಪಿದಯಾ  ........................?

ಇಂದೇಕೊ ನೀ 
ಮೌನದಿ ಕೊರಗಿ ನಿನ್ನ 
ಮರೆತನೆಂದೋ -ಕಡೆಗಣಿಸಿದನೆಂದೋ ?
ಅಳುವ  ನಿನ್ನಯ  ಮೊಗವ  ಕಂಡು 
ನಿನ್ನ  ತಬ್ಬಿ  ಮತ್ತೆ  ಮುದ್ದಾಡಿ
ಸುತ್ತಾಡಿ ಬಂದು ನಿನಗಾಗಿ 
ಸವಿನೆನಹುಗಳ ಭಾವನಾಲಹರಿಯ
ರಸದೌತಣವ ಬಡಿಸಿರುವೆ 
ನಿನ್ನಯ ಮನಕೆ 
ಇಂದು ಸಂತಸವಾಗಿದೆಯಾ ...? 

ನಿನ್ನ ಪ್ರೀತಿಯ ಸವಾರ -@(ಜಿ.ಪಿ.ಗಣಿ)@-
*********************************************************************************************** 

Wednesday, June 27, 2012

ಲಕ್ಷ್ಮೀ ಮಹಾತ್ಮೆ !!

***********************************************************************************************
ಕಾಸು ಕಂಡವನು
ಲೋಕ ಮರೆತಂತಾಯ್ತು
ಕಣ್ಣು ಕಾಣದವನು
ಲೋಕ ಅರಿತಂತಾಯ್ತು
ನಡುವೆ ಎನ್ನಯ ಮನವು
ಕೊರಗಿ ,ಸುಂದರ  ಅರಿವು 
ಹೃದಯಾಳದಲಿ ನಾಟಿ ನಿಂತಂತಾಯ್ತು !!!

-@(ಜಿ.ಪಿ.ಗಣಿ)@-
***********************************************************************************************

ಪ್ರೇಯಸಿಯ ಕಣ್ಮಿಂಚು !!

***********************************************************************************************
ಮನಸ್ಸಿಲ್ಲದ
ಮನಸ್ಸಿನಿಂದ ,
ನನಸಾಗದ
ಕನಸ್ಸಿನಿಂದ ,
ನಾ ಹೇಗೆ?
ದೂರವಾಗಲಿ !!
ನಿನ್ನ ಕಂಗಳ 
ಬಾಹು -ಬಂಧನದಿಂದ !!!!

-@(ಜಿ.ಪಿ.ಗಣಿ)@-
***********************************************************************************************

Tuesday, June 26, 2012

ಪ್ರೇಮದ ಸೆಳೆತ !!

***********************************************************************************************
ನನಗಿಂತ ನಿನ್ನ 
ಹೊತ್ತ ಹೃದಯ
ಭಾರವಾಯಿತೆನೆಗೆ,
ಎಷ್ಟು ತಡೆದರೂ 
ನಿನ್ನೆಡೆಗೆ  ವಾಲುತಿಹುದು ,
ನಿನ್ನಯ ಪ್ರೇಮದಿ
ಸಮತಟ್ಟಾಗಿದ್ದ
ಮನದ ನೆಲವೂ..
ಇಳಿಜಾರಾಯ್ತೆ!!

-@(ಜಿ.ಪಿ.ಗಣಿ)@-
***********************************************************************************************

Monday, June 25, 2012

ಜಿಜ್ಞಾಸೆ-೩

***********************************************************************************************

ಕಣ್ಣ ರೆಪ್ಪೆಯು ರಕ್ಷಿಸುವದ 

ಮರೆತು ಮುಳ್ಳಾಗಿ ನಿಂತರೆ 

ಕಣ್ಣಿನ ಅಂದಕೆ ಸ್ಥಿರವೆಲ್ಲಿ ?

-@(ಜಿ.ಪಿ.ಗಣಿ)@-


***********************************************************************************************

ಜಿಜ್ಞಾಸೆ -೨

***********************************************************************************************
ಉದಯಿಸುವ ರವಿ - ಚಂದ್ರರಿಲ್ಲದಿರೆ ,
ರಾತ್ರಿ -ಹಗಲಿಗೆ ಬೆಲೆಯಲ್ಲಿ ?
ಕೆಚ್ಚೆದೆಯ ಮನಸಿಲ್ಲದಿರೆ ,
ಸುಖ - ದುಃಖಗಳ ಉಂಬುವ
ಜೀವಕೆ ಅರ್ಥವೆಲ್ಲಿ ?
ಹಾರೈಸುವ ಬುದ್ದಿ ಇಲ್ಲದಿರೆ, 
ಮನುಜನಾಗಿ ಮಾನವತೆಗೆ ನೆಲೆಯಲ್ಲಿ ?
ನನ್ನ ಮನದ ದನಿಗೆ ಸ್ಪಂದಿಸದಿರೆ, 
ನಾ ಬದುಕಿ ಫಲವೆಲ್ಲಿ ?

-@(ಜಿ.ಪಿ.ಗಣಿ)@-
***********************************************************************************************

ಪ್ರೀತಿ ಲಂಚವಾದರೆ

***********************************************************************************************
ಪ್ರೀತಿಯೆಂಬ ಲಂಚವ ಕೊಟ್ಟು
ಮೋಹವೆಂಬ ವೇದನೆ ಪಡೆಯುವ
ವ್ಯಾಪಾರದ ಪರಿಯ ಕಂಡು ಹುಸಿ
ನಗು ಮನದಲ್ಲಿ ಮೂಡುತಿದೆ.

-@(ಜಿ.ಪಿ.ಗಣಿ)@-
***********************************************************************************************

ಆಸೆಗೊಂದು ಕಡಿವಾಣ

***********************************************************************************************
ಆಸೆಯೆಂಬುದು ಮನಸ್ಸಿಗೆ  ಅನ್ನಿಸಬೇಕು  ಅಲರ್ಜಿ 
ಮನಸಿಗೆ ಅದ  ಕಾರ್ಯಗತ ಮಾಡಲು ಬೇಕು ಮುತುವರ್ಜಿ !!! 
ಅದಾದರೆ ನಮಗೆ ಸಿಗುವುದು ಸಾಕ್ಷಾತ್ಕಾರಕೆ ಅರ್ಜಿ !!

-@(ಜಿ.ಪಿ.ಗಣಿ)@-
***********************************************************************************************

ವೀರ ಕವಿ

***********************************************************************************************
ಮನಸ್ಸೆಂಬ ಸಾಗರದೊಳಗೆ
ಅನುಭವಗಳ ಅಲೆಯನೆಬ್ಬಿಸಿ 
ಆ  ಅಲೆಯ ಮೇಲೆ ರಂಗು - ರಂಗಿನ 
ಆಟವಾಡಿಸುವ ಪದಗಳ ಜೋಡಿಸಿ 
ಮನದೊಳಗಿನ ನೋವು - ನಲಿವಿನ 
ಚಿತ್ರಣವ ಬಿಂಬಿಸುವ ಲೇಖನಿಯೆಂಬ 
ಖಡ್ಗ ಹಿಡಿದವನೇ ವೀರ ಕವಿ !!!!!

-@(ಜಿ.ಪಿ.ಗಣಿ)@-
***********************************************************************************************

ಹಣದ ವ್ಯಾಮೋಹ !

***********************************************************************************************
ಹಣ - ಹಣವೆಂದು ಬಾಯಿ 
ಬಿಡುವ ಹೆಣಕೇನೆಂಬರು ,
ಹಣವಿಲ್ಲದಿರೆ ಆ  ಹೆಣವ 
ಹೊತ್ತೊಯ್ಯಲೂ ಬಾರದೆ 
ಬೀದಿಪಾಡು ಮಾಡುವ 
ಈ ಜನಕೇನೆಂಬರಯ್ಯ ಶಂಭುಲಿಂಗ !!

-@(ಜಿ.ಪಿ.ಗಣಿ)@-
***********************************************************************************************

ಮಹಾನ್ ಸಚಿವರು !!

***********************************************************************************************
ಮತ ಯಾಚಿಸುವತನಕ 
ಕಂಡ ಕಂಡವರ ಕಾಲ ಹಿಡಿವರು ,
ಮತ ಉಂಡು ಸಚಿವರಾದ ಬಳಿಕ 
ಅದೇ ಕಾಲನೆಳೆವರು,
ಎದ್ದಾಗ ಕಾಲು ಹಿಡಿಯುವ 
ಬಗ್ಗಿದಾಗ ಜುಟ್ಟು ಹಿಡಿಯುವ 
ಈ ಕೆಟ್ಟ -ಹುಳುಗಳನೇನೆಂಬರಯ್ಯ ಶಂಭುಲಿಂಗ !!

-@(-ಗಣಿ -)@-
***********************************************************************************************

Saturday, June 23, 2012

ಯುಗಾದಿ

***********************************************************************************************

ಬಾಳೆಂಬ ಈ ಪಯಣ ಸಾಗುತಿರಲು ,
ಕಹಿಯೆಂಬ ದುಃಖವು ಮೂಡುತಿರಲು,
ಬದುಕೇ ಸಾಕೆನಿಸುವಷ್ಟು 
ಮನದೊಳಗೆ ನೋವು ತುಂಬಿರಲು ,
ಬಂತು ! ಬಂತು !ಬಂತು !
ನವ ವಸಂತದ ,ಚೈತ್ರ ಮಾಸದ 
ಯುಗಾದಿ ! ಈ ಯುಗಾದಿ !
ಮನದ ದುಗುಡವೆಲ್ಲ ಕಳೆದು, 
ಹರುಷವೆಂಬ ಸಿಹಿಯ ಉಣಿಸಲು, 
ಬಂತು ಈ ಯುಗಾದಿ !
ಬೇವು - ಬೆಲ್ಲವ  ಜಿಗಿದು ,
ಬದುಕಿನ ಕಹಿ - ಸಿಹಿಯೆಂಬ 
ಏರುಪೇರಿನ ಅವಗಡವ
ಸರಿದೂಗಲೆಂದು ಬಂತು! 
ಈ ಯುಗಾದಿ!
ನವ  ವರುಷದ ಸೆಲೆ   , 
ನವ ಚಿಗುರಿನ ಎಲೆ ,
ನನ್ನ ಬಾಳಿನ ಪುಟಕೆ ನವ 
ಮುನ್ನುಡಿಯ ಬರೆಯಲೆಂದು 
ಬಂತು , ಈ ಯುಗಾದಿ !
ಯುಗ ಯುಗಕ್ಕೂ ಬೆಂಬಿಡದೆ 
ತೋರುತಿಹುದು ಬಾಳಿಗೆ ಹಾದಿ 
ಈ ಯುಗಾದಿ!! ಈ ಯುಗಾದಿ!!

-@(-ಗಣಿ -)@-
***********************************************************************************************

ಹಾಗೆ ಸುಮ್ಮನೆ

***********************************************************************************************


ಆಗಾಗ ತುಕ್ಕು ಹಿಡಿವ ಮನಕೆ 
ಬಣ್ಣ ಬಳೆಯಲು ಬೇಕಲ್ಲವೇ ,

ನಿನ್ನ ಮುದ್ದಾದ ಮುಂಗುರುಳು !!

-@(-ಗಣಿ -)@-

***********************************************************************************************

ಮುಂಜಾನೆಯ ಕುಹೂ .. ಕುಹೂ .. !!

***********************************************************************************************
           ಮುಂಜಾನೆ ಏಳುವುದೆಂದರೆ ಅದೇಕೋ ಗೊತ್ತಿಲ್ಲ, ಪುಟಾಣಿ ಮಗು ತನ್ನ ಬಳಿ ಇದ್ದ ಆಟಿಕೆಯನ್ನು ಕೇಳಿದಾಗ ಕೊಡದೇ ಇದು ನನ್ನದು -ಇದು ನನ್ನದು ,ನಾ ಯಾರಿಗೂ ಕೊಡುವುದಿಲ್ಲವೆಂದು ಮಾಡುವ ಮೊಂಡಾಟದಂತೆ ಮನವು ಮುಂಜಾನೆಯ ಅರೆನಿದ್ರೆಯನ್ನು ಬಿಟ್ಟುಕೊಡಲು ಹಿಂಜರಿಯುತಿತ್ತು .ಅದನ್ನು ಪುಸಲಾಯಿಸಿ ಹೇಗೋ ಎದ್ದು ಕಣ್ಣನ್ನು ಹೊಸಕುತ್ತ - ಮೈ-ಕೈ - ಮುರಿದು ನಿತ್ಯಕರ್ಮವೆಲ್ಲ ಮುಗಿಸಿ ಎಂದಿನಂತೆ ಮುಂಜಾನೆಯ ನಿಧಾನಗತಿಯ ಓಟ ಬೆಟ್ಟದ ಹಾದಿಯಲಿ ಸಾಗಿತ್ತು ಎಂದೂ ಕಾಣದ  ಅಚ್ಚರಿ !! ಇಂದು ಗೋಚರಿಸಲು ನನಗಾಗಿ ಕಾದಿತ್ತು !!......................................................
..........ಹೀಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ಮುದ್ದಾದ ಮರವೊಂದರಲ್ಲಿ ಕೋಗಿಲೆಯು ನನ್ನ ಕೂಗೀ-ಕೂಗೀ ಕರೆದಂತಾಯ್ತು .ಮನಸ್ಸು ಕಾಣದ ಹಾಗೆ ಕೋಗಿಲೆಯತ್ತ ಮುಖ ಮಾಡಿ ಅದರ ಕುಹೂ .. ಕುಹೂ .. ನಿನಾದವನ್ನು ಮೂಖ-ವಿಸ್ಮಯವಾಗಿ ಆಲಿಸತೊಡಗಿತ್ತು. ದೇಹವು ಮಾಯೆಯಿಂದ ರಸ್ತೆಯ ಬದಿಗೆ ಕಟ್ಟಿದ್ದ ತಡೆ -ಕಟ್ಟೆಯ ಮೇಲೆ ಆಸನವ ಹೊಂದಿತ್ತು !! ಮತ್ತದೇ ಕುಹೂ .. ಕುಹೂ .. ಎಂಬ ಗಾನಸುಧೆ ಎಡೆಬಿಡದೆ ಪ್ರತಿ ಅಂದಾಜು -  ಸೆಕೆಂಡುಗಳಿಗೊಮ್ಮೆ ಕಿವಿಯಲ್ಲಿ ಗುನುಗಿ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು
ಹಾಗೆ ಅಲ್ಲಿ -ಇಲ್ಲಿ  ಕೇವಲ   ಚಿತ್ರಪಟಗಳಲ್ಲಿ ಬಿಟ್ಟರೆ ಪಕ್ಷಿಧಾಮಗಳಲ್ಲಿ ಕಂಡ ನೆನಪು. ಆದರೆ ಸ್ವಾತಂತ್ರ್ಯದಿ ತನ ಮನ ಬಿಚ್ಚಿ ಹಾಡುವ ಗಾನ ಕುಸುಮೆಯನ್ನು ಮನಸೂರೆಗೊಂಡು ಕಣ್ತುಂಬ ನೋಡಿದ್ದು!! 
ಇದೆ ಮೊದಲು , ಅದನ್ನು  ನಂದಿಸುತ್ತಲೇ ನನ್ನ ಬಾಯಿಂದ ಕುಹೂ .. ಕುಹೂ .. ! ಎಂಬ ಮೆಲ್ಲ ದನಿಯ ಶಬ್ದ ನನಗರಿಯದೆ ಹೊರಹೊಮ್ಮತೊಡಗಿತ್ತುಆದರೆ ಏನು ವಿಷಾದವೆಂದರೆ ಸತತವಾಗಿ ಕೂಗುತಿದ್ದ ಕೋಗಿಲೆಯು ನನ್ನ ದನಿಯಿಂದ ಕೊಂಚ ಹೊತ್ತು ಸುಮ್ಮನಾಯಿತು !! :( 
   ಮತ್ತೆ ನನ್ನ ಮೆಲ್ಲ ದನಿ ಶುರುವಾಯ್ತು , ಅದಕ್ಕೆ ಪ್ರತ್ಯುತ್ತರವಾಗಿ ಕೋಗಿಲೆಯು ತನ್ನ ಇಂಪಾದ ಶಬ್ದದಿಂದ ಮಾತಿಗೆ ಕುಳಿತವರಂತೆ ನನ್ನೊಡನೆ ತನ್ನ ದನಿಯಿಂದ ಆಕರ್ಷಿಸಿತ್ತು . ಹೇಗೆ ನಮಗೆ ಹೊರ -ರಾಜ್ಯದಲ್ಲಿ ನಮ್ಮ ಮಾತೃ ಭಾಷೆಯವರು ಸಿಕ್ಕರೆ ಪಟ - ಪಟನೆ ಮಾತುಗಳು ಸಂತಸದಿಂದ ಹರಿಯತೊಡಗುತ್ತವೋ, ಹಾಗೆ ಕೋಗಿಲೆಗೆ ತನ್ನ ಭಾಷೆಯವರು ಸಿಕ್ಕರೆಂದು ನನ್ನೊಂದಿಗೆ ಮನ ಬಿಚ್ಚಿ  ಮಾತನಾಡುತಿತ್ತು. ಅಬ್ಬಾ !!  ಸಮಯದಲ್ಲಿ ಕಾಗೆಗೆ ಕೋಗಿಲೆ ದನಿ ಬಂದ ಹಾಗೆ ನನ್ನ ಮನಕೆ ಹರುಷ ತುಂಬಿ ಮನೋಲ್ಲಾಸದಿಂದ ಭೀಗುತಿತ್ತು. ಹೇಗೆ ಕಣ್ಮುಂದೆ ರತಿ ನಿಂತರೆ ಹೊರ ಲೋಕವು ಮರೆಯಾಗುವುದೋ  ರೀತಿ ಮನಕೆ ಭಾಸವಾಗುತಿತ್ತು . ಇದು ಸುಮಾರು ಇಪ್ಪತ್ತು ನಿಮಿಷಗಳು ನಡೆದಿರಬಹುದೇನೋ!! ಮುಂದೆ ಸಾಗಲು ಏಕೋ ಮನವು ಒಪ್ಪುತ್ತಲೇ ಇರಲಿಲ್ಲ . ಹೇಗೋ ಮಗುವಿಗೆ ಸಾಂತ್ವನ ಹೇಳಿ ಒಪ್ಪಿಸುವಂತೆ  ಮನವೊಲಿಸಿ ಮುಂದೆ ಸಾಗಿದೆ ... 
        ಆದರೆ ವಿಸ್ಮಯವೆಂದರೆ ನಿಧಾನಗತಿಯ ಓಟ ಕೇವಲ ನಡುಗೆಯಾಗಿ ಮಾರ್ಪಟ್ಟಿತ್ತು .ಅದರ ಜೊತೆಗೆ ನಾಯಿಯು ತನ್ನ ಕಿವಿಯನ್ನು ನೆಟ್ಟಗೆ ಮಾಡುವಂತೆ ನನ್ನ  ಕಿವಿಯು ಹಿಗ್ಗಿ ನಿಂತಿತ್ತು !!
            ಕೇವಲ ಕೋಗಿಲೆಯ ಇಂಪು -ಸೊಂಪಾದ ಗಾನಸುದೆ ಕೇಳಿ ಸಂತಸ  ಉಲ್ಬಣಗೊಂಡಿದ್ದ ಮನಕೆ ಉಳಿದ ಪಕ್ಷಿಗಳು ತಮ್ಮ ಕಂಠಸಿರಿಯಿಂದ ತಮ್ಮೆಡೆಗೆ ಆಕರ್ಷಿಸತೊಡಗಿದ್ದವು , ಚಿಲಿ -ಪಿಲಿ , ಕರ -ಕರ , ಕುಟ್ರು - ಕುಟ್ರು , ಕಾ -ಕಾ , ಕುಯ್- ಕುಯ್ , ಸಿಳ್ಳೆ ಹೊಡೆಯುವಂತೆ ,ಅಬ್ಬಾ !!  ಎಲ್ಲೋ   ಸಂಗೀತ ವಾದ್ಯಗಳ ಲೋಕಕ್ಕೆ ಕಾಲಿಟ್ಟಂತೆ ಹೃದಯ ಸ್ಪರ್ಶಿಸತೊಡಗಿತ್ತು , ಮನವು ಹಕ್ಕಿಯಂತೆ ಆಗಸದಿ ತಣ್ಣನೆಯ ಗಾಳಿಯಲಿ ತೇಲತೊಡಗಿತ್ತು .
           ಸದಾ ಆಲೋಚನೆ , ವಿಮರ್ಶನೆ , ನೋವು - ನಲಿವಿನ ಅಳಲಾಟ ಹೀಗೆ ಬದುಕಿನ ದ್ವಂದತೆಯಲ್ಲಿ ಬೇಸತ್ತಿರುವ ಮನಕೆ ನವಲೋಕವು ಕಣ್ಮುಂದೆ ಚಲನಚಿತ್ರದಂತೆ ತೋರತೊಡಗಿತ್ತು . ಕಂಡು ಕಾಣದ ಹಾಗೆ ಇದ್ದ ಕಣ್ಣುಗಳಿಗೆ ಇಂದು ಅನೇಕ ಪಕ್ಷಿಗಳು ತಮ್ಮ ಸೌಂದರ್ಯಮಯ ಗಾನದಿಂದ ತಮ್ಮೆಡೆಗೆ ನೋಡುವಂತೆ ಉದ್ರೇಕಿಸುತ್ತಿದ್ದವು !! ರಸ್ತೆಯಲ್ಲಿ ಆಗಾಗ  ಸಾಗುತಿದ್ದ ವಾಹನಗಳ ಶಬ್ದಗಳು ಕೇಳುತ್ತಲೇ ಮನಸ್ಸೇಕೋ ದೂರದರ್ಶನದ ಚಾನಲ್ ಬದಲಿಸುವಂತೆ ಹಕ್ಕಿಗಳ ಗಾನ ಲೋಕಕ್ಕೆ ಕರೆದೊಯ್ಯುತ್ತಿತ್ತು . ಕಣ್ಮುಂದೆ ಮುಂಜಾನೆಯಲ್ಲಿ ಸುಂದರ ತರುಣಿಯರ ಕಂಡು ಕಣ್ಣುಗಳು ಮಿಟಿಕಿಸದೆ ನೇರ ನೋಟದಲ್ಲಿ ದಿಟ್ಟಿಸಿ ನೋಡಲು ಆಕರ್ಷಿಸಿದ್ದವುಆದರೆ ಇಂದೇಕೋ ಪ್ರಕೃತಿ  ಸೌಂದರ್ಯದ ಮುಂದೆ ಅದು ನಿಲ್ಲಲು ಅಶಕ್ತವಾಗಿತು. ರೀತಿ ಎಂದು ನನಗೆ ಆಗಿರಲಿಲ್ಲವಲ್ಲ ಎಂದು ಬೆರಗಾಗಿ ಮೂಖ-ವಿಸ್ಮಯನಾಗಿ ಹಕ್ಕಿಗಳ ದನಿಯ ಗುಂಗಿನಲ್ಲೇ ನನ್ನನ್ನು ಮಾಯೆಯೊಂದು ತಾನು ಅಂದುಕೊಂಡ  ಹಾಗೆ  ಆಡಿಸಿತ್ತು ಅನ್ನಿಸುತ್ತದೆ !! ಹಾಗೆ ಸ್ವಲ್ಪ ದೂರದಲ್ಲಿ ನಿಬ್ಬೆರಗಾಗಿ ನಿಂತುಹೊದೆ . ದಿನವೂ ಇನ್ನು ಅಷ್ಟು ದೂರ ಹೋಗಿ ಬರಬೇಕಲ್ಲ  ಎನ್ನುತ್ತಿದ್ದ ಮನವು ,ಇಂದೇಕೋ ಹಿಂದೇಟು ಹಾಕುತಿತ್ತು ಅಷ್ಟರಲ್ಲಿ  ಕಣ್ಣಿಗೆ ಮನೆಯ ಹತ್ತಿರದ ರಸ್ತೆ ಆಗಲೇ ಕಾಣಿಸುತ್ತಿತ್ತು . ಮನಸ್ಸಿಗೆ ಮತ್ತೆ ಪೀಕಲಾಟ , ಮಗುವಿನಂತೆ ನನಗೆ ಅದು ಬೇಕು , ಹುಹ್ ಇಲ್ಲ ಅಂದರೆ ನಾನು ಬರೋಲ್ಲ ಹುಹ್- ಹುಹ್ ಎಂದು ಹಠ ಮಾಡತೊಡಗಿತ್ತು. ದಿನವೂ ಒಂದು ತಾಸು ನಡೆಸುತಿದ್ದ   ನಿಧಾನಗತಿಯ  ಓಟ ಇಂದೇಕೋ ಎರಡೂವರೆ ತಾಸು ಕಾಲ್ನಡುಗೆಯಲ್ಲಿ ಮುಗಿದಿತ್ತು .ಸಮಯ ನೋಡಿ ಅಚ್ಚರಿಯಾಗಿತ್ತು !! ಹೇಗೋ ಮನಸ್ಸೆಂಬ ಮಗುವಿಗೆ ಮತ್ತೆ ಪುಸಲಾಯಿಸಿ ಮನೆಗೆ ಹಿಂದುರುಗಿ ಬಂದೆ ............ ಬಂದವನೇ  ಲೇಖನಿ -ಹಾಳೆಯನ್ನು ಹಿಡಿದು ಮುಂಜಾನೆಯ ವಿಸ್ಮಯ ಪಯಣದ ತುಣುಕನ್ನು ನಿಮ್ಮ ಮುಂದಿರಿಸಿದೆಅನುಭವಿಸಿದ್ದನ್ನು ನನಗೆ ತೋಚಿದ ರೀತಿಯಲ್ಲಿ ಹಾಗೆ ಇಳಿಸಿದ್ದೇನೆ . ಇಷ್ಟವಾದಲ್ಲಿ ನಿಮ್ಮ ಮನಸ್ಸಿಗೆ ಒಂದು ನಗೆ ಬೀರಿ ಹಸನ್ಮುಕಿಯಾಗಿರಿ . ಏನೋ ಪರವಾಗಿಲ್ಲ ಅಂದುಕೊಂಡಲ್ಲಿ ಒಂದು ಪುಟ್ಟ ಮಗುವೊಂದು ಕಥೆ ಹೇಳಲು ಪರದಾಡುವ ಸಂದರ್ಭವ ನೆನದು ಮುಗುಳ್ನಕ್ಕು ಬಿಡಿ .
*********ಕೊನೆಯಲ್ಲಿ ಒಂದು ಸಣ್ಣ ಕಿವಿ ಮಾತು . ಮುಂಜಾನೆಯ ಹಕ್ಕಿಗಳ ಸುಮಧುರ ಗಾನಲೋಕವ ಅನುಭವಿಸಲು ನೀವೂ ಪ್ರಯತ್ನಿಸಿ.ಬರಿ ಇಯರ್ ಫೋನ್ ಹಾಕಿಕೊಂಡು ಬೆಳಗ್ಗೆ  ಮತ್ತು ಸಂಜೆಯ ವೇಳೆ  ಸುತ್ತಾಡುವ ಬದಲು   ನಿಮ್ಮ ಕಿವಿಗೂ ಪ್ರಕೃತಿ ಕೊಡುವ ಇಂಪಾದ ದನಿಯ ಕೇಳಿಸಿ ********

-@(-ಜಿ.ಪಿ.ಗಣಿ -)@-
***********************************************************************************************