ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, July 6, 2014

ಕರ್ಮಣ್ಯೇ ವಾದಿಕಾರಸ್ತೆ!!

***********************************************************************************************
ಹಸಿರೆಲೆಗಳಿಂದೇರಿದ ಹನಿಯ ಮುತ್ತು ಆವಿಯಾಗಿಹುದೋ
ಕರಗಿ ಭುವಿಯನ್ ಸೇರಲ್ ಬಯಸಿತಿರ್ಪುದು

ಹಸಿವ ಬೇಗೆಯೋಳ್ ಹೃದಯವಂ ಹಿಸುಕಿದಂತಾದೆಡೆ
ಖಾಲಿಯಾಗಿಹ ಉದರವನ್ ಭರ್ತಿಯಾಗಿಪುದೇ

ಸೋಲೆಂಬ ಭಯಂ ಆತ್ಮದೊಳಗಿರಲ್
ಗೆಲುವೆಂಬ ಭಕ್ತಿಯನ್ ಆರಾಧಿಸಲಾಗಿಪುದೇ

ಆತ್ಮದೋಳ್ ಸಾವಿನ ಶಂಕೆಯನ್ ಹೊತ್ತು
ದೇಹವನ್ ದೂಶಿಸಿದೆಡೆ ಸ್ವರ್ಗವನ್ ಪಡೆಯಲಾಗಿಪುದೇ

ಚಿಂತೆಯೆಂಬಾ ಚಿತೆಯೋಳ್ ಹುದುಗಿ
ಜೀವ ಭಿಕ್ಷೆಯನ್ ಕೇಳಿದೆಡೆ
ಚಿತೆಯನ್ ಸುಡುವ ಬೆಂಕಿಯೋಳ್
ಆಲಾಪನೆಯೂ ಬೆಂದು ಬೂದಿಯಾಗದಿರ್ಪುದೇ

ತಳಮಳದಿಂ ಬಳಲ್ತಿರುವ ಮಸ್ತಕವನ್
ಅಡಗಿಸುವ ದಿಟ್ಟ ಧೀರತನಂ ನಿನ್ನಾತ್ಮದೊಳಲ್ಲದೇ
ಮತ್ತೆಲ್ಲೋ ಹುಡುಕಲಾಗಿಪುದೇ

ಮನಸು ಭಾರದೊಳಿರಲ್ ಕತ್ತಲಾವರಿಪುದು
ನಿಮಿಷ ನಿಮಿಷವನ್ ಪ್ರೀತಿಸಲ್ ಬದುಕು ಹಸನಾಗುವುದು
ಕರ್ಮವನ್ ನಡೆಸುತಲಿ ಫಲವನ್ ಅವನ ಪಾದಕರ್ಪಿಸಿದೆಡೆ
ಆತ್ಮಗರ್ಭದೋಳ್ ಆತನವತರಿಸುವನು

~ಜಿ.ಪಿ.ಗಣಿ~
***********************************************************************************************