ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, June 28, 2015

ತೇವವಿಲ್ಲದ ತಾವರೆಯ ಎಲೆಯಂತೆ ಈ ಜಡ ಜೀವ ಮತ್ತು ಆತ್ಮ

***********************************************************************************************
ಯಾರೋ ತಟ್ಟುತಿಹರು
ಎನ್ನೆದೆಯೊಳಗಿನ ಕದವನು
ಬಹು ದಿನಗಳಿಂದ...
ಎಷ್ಟೋ ಬಾರಿ
ಅರುಚಿರಲೂಬಹುದು!
ಅರಿವಾಗಲೇ ಇಲ್ಲ.
ಕಾಲಿಂಗ್ ಬೆಲ್
ಕೂಡ ಸುಸ್ತಿಯಲ್ಲಿಲ್ಲ!!
ಅಯ್ಯಯ್ಯೋ! ಎಂತಹ ಪ್ರಮಾದವಾಯ್ತು,
ಹೊರಗಿರುವವರಿಗೆ ಒಳಗೊಬ್ಬರನು
ಬಂಧಿಸಿರುವವರೆಂದು
ಅರಿಯದೇ ಹೋಯ್ತೆ...
ಆರಿರಬಹುದು??
ಪ್ರಶ್ನೆಗೆ ಉತ್ತರವಿಲ್ಲ!!
ಕಾರಣ ಹುಡುಕುತ್ತ ಹೊರಟರೆ...
ಮತ್ತಷ್ಟು ಒಗಟು!!
ಎಲ್ಲಾ ಅಡ್ಡಲಾಗಿರುವ
ಕಂದಕಗಳನು ದಾಟಿ
ಅವರನು ಸೇರಬೇಕಿದೆ!
ತಿಳಿಯದೇ ಮನವು ಹೇಳುತಿದೆ
ಅವರಿಗೆ ಎನ್ನ ಸಹಾಯವು
ಬೇಕಿದೆಯಂದು...
ಅದು ನನ್ನದೇ ಪರಿಧಿಯಂದು
ನನ್ನದೇ ಬಿಂದುವೆಂದು
ಬುದ್ಧಿಯ ಆರಾಮಿನಲಿ
ಹ್ರದಯದಸತ್ಯದಲಿ
ಹುಡುಕಲಾಗದೆ ಹೋಯ್ತೆ...
~ಜಿ.ಪಿ.ಗಣಿ~
***********************************************************************************************

No comments:

Post a Comment