ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, February 3, 2014

ಜಿಜ್ಞಾಸೆ


*********************************************************************************************** ಅರಿಸಿನ ಕುಂಕುಮವೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರದ್ದೇ ಆದ ಮೌಲ್ಯವನ್ನು ಪಡೆದುಕೊಂಡಿದೆ. ಇವು ಮದುವೆಯಾದ ಹೆಣ್ಣಿನ ಅಂದಕೆ ಭೂಷಣವು, ಸುಮಂಗಲಿಯ ಸಂಕೇತವು, ಜೊಲ್ಲು ನಾಯಿಗಳಿಗೆ ಕಾಳಿಮಾತೆಯ ಅವತಾರವೂ ಆಗಿ ಸೂಚಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮೌಲ್ಯ ನಶಿಸಿಹೋಗುತ್ತಿದೆ. ನಶಿಸಿಹೋಗುವುದಿರಲಿ ಅದನು ಹಾಕಿಕೊಳ್ಳುವ ಸಂಕೆಯೂ ಬಹಳಷ್ಟು ಕ್ಷೀಣಿಸಿ ಮಾಯವಾಗತೊಡಗಿದೆ. ಮತ್ತಷ್ಟು ಇದರಲ್ಲಿ ಮೌಡ್ಯ ಎಂದರೆ ಯಾರೋ ಹರಕೆಯೊತ್ತರೆಂದು ಕುಂಕುಮವ ಬೆಟ್ಟದ ಮೆಟ್ಟಿಲಿಗೆ ಹಾಕುತ್ತಾ ಹೋಗುವುದು. ಹಾಗಾದರೆ ಒಂದು ಪ್ರಶ್ನೆ, ಮನೆಯಲ್ಲಿ ಕುಂಕುಮ ಕೈಜಾರಿ ಕೆಳಗೆ ಬಿದ್ದರೆ ಅದು ಅಪಶಕುನ; ಅಂದಮೇಲೆ ಪಾದರಕ್ಷೆಗಳನು ಹಾಕಿ ತಿರುಗುವ ಮೆಟ್ಟಿಲಲಿ ಹಾಕುವ ಕುಂಕುಮಕೆ ಮೈಲಿಗೆಯಾಗಲಿಲ್ಲವೇ? ಒಮ್ಮೆ ಒಂದು ವಸ್ತುವಿಗೆ ಪೂಜ್ಯ ಸ್ಥಾನ ಕೊಟ್ಟಮೇಲೆ ಅದಕ್ಕೆ ಅದರ ಕಿರೀಟವ ತೊಡಿಸಲೇಬೇಕು. ಇಲ್ಲವಾದರೆ ಆ ಸ್ಥಾನಕೆ ಬೆಲೆಯಲ್ಲಿ ? ಈ ರೀತಿ ಮಾಡುವವರಿಗಿಂತ ಈ ಸಂಪ್ರದಾಯವ ನಂಬದಿರುವವರೇ ಲೇಸು. ಅರ್ಧ ಇತ್ತ ಇನ್ನರ್ಧ ಅತ್ತ ಹೀಗೆ ಎಡಬಿಡಂಗಿಯವತಾರ ಎಂದಿಗೂ ಸಲ್ಲ. ಯಾವುದೇ ವಿಷಯವಾಗಲಿ ನಂಬಿದರೆ ಪೂರ್ತಿ ನಂಬಬೇಕು, ಇಲ್ಲವಾದರೆ ಒಂದು ಅಣುವಿನಷ್ಟೂ ನಂಬಬಾರದು. ಹೇಳಿಕೆಯ ಮಾತು ಕೇಳಿ ಅದನು ನಂಬುವ ಮೊದಲು ಅದನು ಪರಾಂಬರಿಸಿ ಮುನ್ನಡೆಯುವುದು ಸಶಕ್ತ ನಾಗರೀಕನ ಕರ್ತವ್ಯವಲ್ಲವೇ?
***********************************************************************************************

No comments:

Post a Comment