ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, February 21, 2015

ಬಚ್ಚಿಟ್ಟ ಪ್ರೀತಿಯನೆಂದಿಗೂ
ಹುಡುಕಲಾಗದು
ಪಡೆದ ಜ್ಞಾನವನು
ಹಂಚದಿರದು
ಮಸ್ತಕದೋಳ್ 
ಜೀರ್ಣವಾಗದು!
ಕಿಸೆಯಲ್ಲಿ ಕಾಸಿರಲು
ಹೋಟೆಲಿನಲಿ ಶೋಕಿಯ ಅಮಲಿರಲು
ಮಾಡಿಟ್ಟ ಅನ್ನವು ಮನೆಯಲಿ
ಹಳಸುತ್ತಿರುವುದು...
ಜೇಬು ಬರಿದಾಗಿ
ನಾರುವ ಅನ್ನದ ಅಗುಳಿಗೂ
ಕಚ್ಚಾಟ ನಡೆದಿದೆ
ಬೀದಿ ನಾಯಿಗಳೊಡನೆ!
ತಿಂದ ಅನ್ನವಾಗಲೀ
ಕುಡಿದ ನೀರಾಗಲೀ
ಸೇವಿಸುವ ಗಾಳಿಯಾಗಲಿ
ಹೊರ ಬರುವವು
ಮತ್ತೊಂದು
ಜನ್ಮವ ತಳೆದು
ಹೊಸ ರೂಪವ ಪಡೆದು ...
~ಜಿ.ಪಿ.ಗಣಿ~

1 comment:

  1. ಕವನದ ಹೂರಣ ಬಹಳವೇ ಇಷ್ಟವಾಯಿತು.

    ReplyDelete