ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, June 12, 2014

ರಕ್ತದೊತ್ತಡ

***********************************************************************************************
ಕಸಿಯುತಿರುವ ಮನದ ಭಾವನೆಯ ಹೊನಲು
ಬಾಡುತಿರುವ ಆಸೆಯೆಂಬ ಹೂವಿನ ಘಮಲು

ದೂರವಾಗುತಿಹುದು ಎದೆಯ ಬಡಿತ ಉಸಿರಿಗೆ ಸಿಗದೇ
ಮರೆಯಾಗುತಿಹುದು ಕನಸುಗಳು ವಾಸ್ತವದ ಅರಿವಿರದೇ

ಭಾರವಾಗಿಹುದೆಲ್ಲವೂ ಮೌನದ ಮಡಿಲಲ್ಲಿ
ಅರೆಹುಚ್ಚು ಮತಿಗೆ ಚಿಂತೆಯೆಂಬ ಒತ್ತಡದ ಸುಳಿಯಲ್ಲಿ

ಗಂಟಲೊಳಗಿಳಿಯುವ ನೀರಿಗೂ ಆಹಾಕಾರ
ಒಣಗುತ್ತಿರುವುದೇಕೋ ಹಸಿರ ಅಂತರಂಗದಲಿ
ಬದುಕೆಂಬ ಕುಡಿಯೊಡೆದ ಬೀಜ

~ಜಿ.ಪಿ.ಗಣಿ~
***********************************************************************************************

1 comment:

  1. ಸದರೀ ಕುಡಿಯೊಡೆದ ಬೀಜವು ಪ್ರೇಮ ವೃಕ್ಷವಾಗುವ ಮತ್ತು ಸಫಲ ಫಲ ಕೊಡುವ ಕಾಲವೂ ದೂರವಿಲ್ಲ.

    ReplyDelete