ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, November 30, 2012

ವಾಸ್ತವ ಸತ್ಯ !

***********************************************************************************************
ಕಾರ್ಯ ತುರ್ತುಗತಿಯಲ್ಲಿ 
ಸಾಗಲು ತೆತ್ತಬೇಕು ಹಣವನ್ನು !
ಇಲ್ಲವಾದರೆ ತಿರುಗಾಡಿಸಿ 
ಇಳಿಸುವರು ನಮ್ಮ ಬೆವರನ್ನು !

ಕೆಲಸಕ್ಕೂ - ಸಮಯಕ್ಕೂ 
ಇರುವುದೊಂದು ಬಗೆಯ ನಂಟು !
ಆ ನಂಟು ಉಳಿಯಲು ಕಿಸೆಯಲ್ಲಿ 
ತುಂಬಿರಬೇಕು ಕಾಸಿನ ಗಂಟು !

ಕೆಲಸವಾಗುವ ತನಕ 
ಬೇಕು, ನಯ-ವಿನಯ !
ಇಲ್ಲವಾದರೆ ಎಲ್ಲವೂ 
ಆಗುವುದು, ಅಯೋಮಯ !

~ಜಿ.ಪಿ.ಗಣಿ~
***********************************************************************************************

No comments:

Post a Comment